ರಾಜಸ್ಥಾನದ ಪಾಕ್ ಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುದ್ಧ ವಿಮಾನಗಳ ತುರ್ತು ಲ್ಯಾಂಡಿಂಗ್ ಫೀಲ್ಡ್ ಉದ್ಘಾಟನೆ
ಜಲೋರಿ : ಮರಭೂಮಿಯ ಮಧ್ಯೆ ರಾಷ್ಟೀಯ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಇಳಿಸುವ ಮೂಲಕ ಯುದ್ಧ ಸನ್ನದ್ಧತೆಯಲ್ಲಿ ಭಾರತ ಮತ್ತೊಂದು ಮೈಲುಗಲ್ಲು ದಾಟಿದೆ.
ಇಂದು ಮೊಟ್ಟಮೊದಲ ಭಾರಿಗೆ ಭಾರತೀಯ ವಾಯುಪಡೆಯ ಜಾಗ್ವಾರ್ ವಿಮಾನವು ರಾಜಸ್ಥಾನದ ಜಲೋರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಫೀಲ್ಡ್(ಮೈದಾನ)ದಲ್ಲಿ ಭೂ ಸ್ಪರ್ಶ ಮಾಡಿ ಯಶಸ್ವಿಯಾಗಿ ಇಳಿದಿದೆ.
ನಿಮಗೆಲ್ಲಾ ಗೊತ್ತಿದೆ ಎಂದು ದೇಶ ಸ್ವತಂತ್ರದ ಅಮೃತ ಮಹೋತ್ಸವ ಆಚರಿಸುತ್ತಿದೆ. ಅದರ ಜೊತೆಗೆ 1971ರ ಯುದ್ಧದ, ಯಾವುದರಲ್ಲಿ ನಾವು ವಿಜಯ ಸಾಧಿಸಿದ್ದೆವು, ಅದರ ಸ್ಮರಣೀಯ ವರ್ಷವನ್ನು ಕೂಡ ಈ ದೇಶ ಆಚರಿಸುತ್ತಿದೆ. ಮತ್ತು ಇಂದು ಯಾವ ಭೂಮಿ ಮೇಲೆ ನಿಂತು ನಾವು ನಮ್ಮ ವಿಚಾರ ವ್ಯಕ್ತಪಡಿಸುತ್ತಿದ್ದೇವೆ ಇದು ಕೂಡ 1971ರ ವಿಜಯದ ಸಾಕ್ಷಿಯಾಗಿದೆ. ಇಂತದರಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್ ಮನದಲ್ಲಿ ಸಂತೋಷ ಹೆಚ್ಚಿಸುತ್ತದೆ. ಜೊತೆಗೆ ಸುರಕ್ಷೆಯ ದೃಷ್ಟಿಯಿಂದ ಮನದಲ್ಲಿ ಒಂದು ಆತ್ಮವಿಶ್ವಾಸ ಸೃಷ್ಟಿಸುತ್ತದೆ. ಅಂತರಾಷ್ಟ್ರೀಯ ಗಡಿಯಿಂದ ಈ ಸ್ಥಳ ಹೆಚ್ಚು ದೂರವಿಲ್ಲ. ಅಂತರಾಷ್ಟ್ರೀಯ ಗಡಿಯಿಂದ ಸ್ವಲ್ಪವೇ ದೂರದಲ್ಲಿ ಇಂತಹ ಒಂದು ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್ ಸಿದ್ಧಪಡಿಸಿರುವ ಮೂಲಕ ಭಾರತ ತನ್ನ ಏಕತೆ, ಅಖಂಡತೆ ಮತ್ತು ಸ್ವಪ್ರಭುತ್ವತೆಯ ರಕ್ಷಣೆಯಲ್ಲಿ ಸದಾ ಸಿದ್ಧವಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತದಲ್ಲಿ ಸಶಕ್ತವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ, ಎಂದು ರಕ್ಷಣಾ ಮಂತ್ರಿ ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 20 ಸ್ಥಳಗಳಲ್ಲಿ ತುರ್ತು ಲ್ಯಾಂಡಿಂಗ್ ಕ್ಷೇತ್ರಗಳನ್ನು ಸಿದ್ಧಪಡಿಸುತ್ತಿದೆ ಮತ್ತು ಅನೇಕ ಸ್ಥಳಗಳಲ್ಲಿ ಹೆಲಿಪ್ಯಾಡ್ಗಳನ್ನು ನಿರ್ಮಿಸುತ್ತಿದೆ. ಇದೊಂದು ದೊಡ್ಡ ಸಾಧನೆಯಾಗಿದೆ, ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ ಅವರು ಜಲೋರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮೈದಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ತುರ್ತು ಲ್ಯಾಂಡಿಂಗ್ ಫೀಲ್ಡ್ ಮತ್ತು ಮೂರು ಹೆಲಿಪ್ಯಾಡ್ಗಳು ಯುದ್ಧದ ಸಮಯದಲ್ಲಿ ಮಾತ್ರವಲ್ಲ, ಯಾವುದೇ ಪ್ರಾಕೃತಿಕ ವಿಕೋಪದ ಸಮಯದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಉಪಯುಕ್ತವಾಗಲಿದೆ, ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಹೊಸದಾದ ಕಲ್ಪನೆಯನ್ನು ಪ್ರಸ್ತಾಪಿಸಿದಾಗ, ಆತಂಕಗಳು ಹೊರಹೊಮ್ಮುತ್ತವೆ. ಆದರೆ, ರಕ್ಷಣಾ ಸಚಿವಾಲಯ ಮತ್ತು ವಾಯುಪಡೆಯ ಬೆಂಬಲಕ್ಕಾಗಿ ಸಂತೋಷವಾಗಿದೆ, ಇದು 3 ಕಿಮೀ ಉದ್ದದ ರಸ್ತೆ-ಕಮ್-ಏರ್ ಸ್ಟ್ರಿಪ್ ಅನ್ನು ಯಶಸ್ವಿಯಾಗಿ ಆರಂಭಿಸಲು ಕಾರಣವಾಗಿದೆ, ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.